Friday, October 31, 2008

ವಿವಾಹ ಆಮಂತ್ರಣ

ಆತ್ಮೀಯರೇ,

ನನ್ನ ವಿವಾಹವು
ಸೀಮಾ ಎನ್ ಕೆ
ಇವರೊಂದಿಗೆ ನಡೆಯುವಂತೆ
ಗುರು ಹಿರಿಯರು ನಿಶ್ಚಯಿಸಿದ್ದು
ಈ ಶುಭ ಸಂದರ್ಭದಲ್ಲಿ ತಮ್ಮ ಇರುವಿಕೆ
ನಮ್ಮ ಸಂತಸವನ್ನು ಇಮ್ಮಡಿಸಲಿದೆ
ನಿಮ್ಮ ಹಾರೈಕೆ ಆಶೀರ್ವಾದ ನಮ್ಮೊಂದಿಗಿರಲಿ,
ತಮ್ಮ ಬರುವಿಕೆಯನ್ನುನ ಇದಿರು ನೋಡುವ

ನಿಮ್ಮ
ಸಿಮ್ಮಾ
ಆರತಕ್ಷತೆ ಮುಹೂರ್ತ
೦೮-೧೧-೨೦೦೮ ಶನಿವಾರ ೦೯-೧೧-೨೦೦೮ ಭಾನುವಾರ
ಸಂಜೆ ೭.೦೦ ರಿಂದ ೯.೦೦ ಬೆಳಿಗ್ಗೆ ೧೧.೨೦ ರಿಂದ ೧೧.೫೫

ಸ್ಥಳ
ಎನ್ ಎ ಕೆ ಕಲ್ಯಾಣ ಮಂಟಪ
ನಂ ೨೭೫/೮, ನ್ಯೂ ಟಿಂಬರ್ ಯಾರ್ಡ್ ಲೇ ಔಟ್,
(ಸ್ಯಾಟಲೈಟ್ ಬಸ್ ನಿಲ್ದಾಣದ ಹತ್ತಿರ) ಮೈಸೂರು ರಸ್ತೆ, ಬೆಂಗಳೂರು





Thursday, September 25, 2008

ನಾ ದೂರವೇ ಇರುತ್ತೇನೆ

ನಾ ದೂರವೇ ಇರುತ್ತೇನೆ; ಇರಲೇ ಬೇಕು ಕೂಡ.
ನಾ ದೂರದೇ ಇರುತ್ತೇನೆ; ದೂರ ಬಾರದು ಕೂಡ.
ದೂರವೇಕಿರುತ್ತೇನೆ ? ನೀ ಬಿಟ್ಟು ಹೋಗುವ
ನೆನಪುಗಳ ಆರಿಸಿ ಕೊಳ್ಳಲು.
ಅಗಲುವಿಕೆಯ ಗಾಯವ ಆಗಿಂದಾಗ್ಗೆ
ಒರೆಸಿ ಕೊಳ್ಳಲು.
ಮತ್ತು ದೂರದಲ್ಲಿ ಸಾಗುವ ನಿನಗೊಂದು
ಶುಭ ಹಾರೈಸಲು.

Friday, September 12, 2008

ಬರಿ ಗಾಲು ಮತ್ತು ಚಪ್ಪಲಿ

ಈವತ್ತು ಯಾಕೋ ಕಾಲಿನ ಕಡೆ ನೋಡ್ತಾ ಇರುವಾಗ ಯಾಕೋ ಬೆತ್ತಲೆ ಪಾದಗಳು ನೆನಪಾದವು. ಹೌದಲ್ಲಾ ಬರಿ ಗಾಲಲ್ಲಿ ನಡೆದು ಎಷ್ಟೊಂದು ದಿನವಾಯ್ತಲ್ಲ ಅಂದು ಅಂದು ಕೊಂಡವನು ಚಪ್ಪಲಿ ಬಿಟ್ಟು ಬರಿಗಾಲ್ಲಿ ನಡೆದೆ. ಮೊದಲು ಮಣ್ಣು ಕೂಡ ಚುಚ್ಚಿದಂತೆನಿಸಿದರೂ ನಂತರ ಹೊಂದಿ ಕೊಂಡೆ. ಮಣ್ಣು, ಕೆಸರು, ಮಳೆಯ ನೀರಿನ ತಂಪು, ಹುಲ್ಲಿನ ಕಚಗುಳಿ, ಕಾಣದ ಸಣ್ಣ ಮುಳ್ಳಿನ ಚುಚ್ಚುವಿಕೆ. ಓಹ್! ಎಲ್ಲಾ ಅದೆಷ್ಟು ಹಿತವೆನಿಸಿತು! ಇದನ್ನೆಲ್ಲಾ ಯಾಕೆ ಇಷ್ಟು ದಿನ ಮರೆತೆ ಎಂದು ನನ್ನ ನ್ನೇ ನಾನು ಬಯ್ದು ಕೊಂಡೆ.
ಆ ದಿನಗಳು ಚಪ್ಪಲಿಯಿಲ್ಲದ ಆ ದಿನಗಳು ನೆನಪಾದವು. ಚಪ್ಪಲಿಯಿಲ್ಲದೆ ಮುಳ್ಳು ತುಳಿದಿದ್ದು (ಜಾಲಿ ಮುಳ್ಳು) ನೆನಪಾಯ್ತು. ನಿಂಗೊತ್ತಾ ಈ ಮುಳ್ಳು ಮುರಿತದಲ್ಲೂ ವಿಧಗಳಿವೆ. ಹಸಿ ಜಾಲಿ(ಬಳ್ಳಾರಿ ಜಾಲಿ) ತುಳಿದ್ರೆ ಅದು ಕಾಲಲ್ಲಿ ಮುರಿಯೋದಿಲ್ಲ, ಆದರೆ ಆ ನೋವಿದೆಯಲ್ಲ ಮಾರಾಯ್ತಿ! ಅಬ್ಬಾ ಅದನ್ನ ಅನುಭವಿಸಿಯೇ ತೀರ ಬೇಕು. ಕಾಲು ಎತ್ತಿಡಲೂ ಸಾಧ್ಯವಾಗೋದಿಲ್ಲ ಗೊತ್ತಾ? ಮೂರು ದಿನ ಬೇಕು ಸರಿಯಾಗಿ ಓಡಾಡ್ಲಿಕ್ಕೆ.
ಇನ್ನು ಕೊಳೆತ ಜಾಲಿ ಮುಳ್ಳು ತುಳಿದ್ರಂತೂ ಕರ್ಮ! ಕಾಲಲ್ಲಿ ಮುಳ್ಳು ಮುರಿಯೋದಂತೂ ಗ್ಯಾರಂಟಿ. ಜೊತೆಗೆ ನೋವು ಮತ್ತು ಕಾಲಿಟ್ಟಾಗಲೆಲ್ಲಾ ಈಟಿಯಿಂದ ಅಂಗಾಲಿಗೆ ಚುಚ್ಚಿದಂತಹ ಅನುಭವ. ಅನುಭಾವಿಸ ಬೇಕು ಆ ಸ್ವರ್ಗ! ಅದನ್ನ ಬಗೆದು ತೆಗೀಲಿಕ್ಕು ಬರೋದಿಲ್ಲ. ಸ್ವಲ್ಪ ಬಗೆದು ಕಳ್ಳಿ ಅಥವಾ ಎಕ್ಕೆ ಅಥವಾ ಕಿವಿಯಲ್ಲಿನ ಕಸವನ್ನು ತೆಗೆದು ಅಥವಾ ಎಮ್ಮೆ ಸಗಣಿಯನ್ನು ಕಟ್ಟಿ ಅದು ಕೀವಾಗುವುದನ್ನು ಕಾಯ್ದು ಮೂರ್ನಾಲ್ಕು ದಿನ ಕಾದು ಬಗೆದು ತೆಗೆದಾಗ ನಿಜಕ್ಕೂ ಸ್ವರ್ಗ ಸುಖ!
ಅಂದ ಹಾಗೆ ಹೇಳುವುದ ಮರೆತೆ, ಈ ಮುಳ್ಳು ಬಗೆಸಿ ಕೊಳ್ಳೋ ಸುಖ ಇದೆಯಲ್ಲಾ ಎಂತಾ ಮಜ ಗೊತ್ತಾ? ಬಗೆಯುವವರ ಕೈಯ್ಯಲ್ಲಿ ಕಾಲು ಕೊಟ್ಟು ಹಲ್ಲು ಕಚ್ಚಿ ಹಿಡಿದು(ಒಮ್ಮೊಮ್ಮೆ ಬಟ್ಟೆ ಕಚ್ಚಿ) ಬಗೆಸಿ ಕೊಳ್ಳೋದು ಓಹ್! ಮಸ್ತ್ ಮಾರಾಯ್ತಿ.

ಹಾಗೆಯೇ ಮುಳ್ಳು ಬಗೆಯೋದು ಕೂಡ ಒಂದು ಕಲೆ ಗೊತ್ತಾ? ಮುಳ್ಳು ಹೊಕ್ಕವರ ಗಮನವನ್ನ ಬೇರೆಡೆಗೆ ತಿರುಗಿಸಿ ನಿಧಾನಕ್ಕೆ ಬಗೀಬೇಕು. ಮುಳ್ಳು ಬಗೆಯಲು ಬಳಸುವ ಸಾಧನಗಳಲ್ಲೂ ವೈವಿಧ್ಯತೆಯಿದೆ. ಮುಳ್ಳು(ಮುಳ್ಳನ್ನ ಮುಳ್ಳಿನಿಂದಲೇ ತೆಗೀ ಬೇಕಲ್ಲ), ಸೂಜಿ, ಪಿನ್ನು, ಮುಳ್ಳಗಡ್ಡಿ ಹೀಗೇ.

ಆ ಅನುಭವಗಳೇ ಅಂತಹವು. ಕಾಲ ತುಂಬೆಲ್ಲಾ ತೂತುಗಳೇ ಇರ್ತಿದ್ದವು! ಈಗ ಬರೀ ಗಾಲು. ನುಣ್ಣನೇ ಖಾಲಿ ಕಾಲು!..!

Wednesday, August 6, 2008

Say Laxmana

He went to Forest
She 'Pathivrathe' followed him.
She can'n live without him.
You, the great brother!Took the backbone of Rama.
That's allright,
But, what about me?

I heard that, Ravana took Sita to Lanka
From that Rama became unconscious!
You the great brother! Gave support to him.
You all together
constructed a bridge to Lanka
and killed Ravana.
That's all for Rama
To mingle with Sita.
Because they can'n live lonely.
Yes, it's true.
But, what about me?
Laxmana, why can't you think about me?
Why these Ayodhya people and all other
didn't look about me?

Say Laxmana, it's me, your Wife!
Why you didn't ask a word about me?!!!

(ಇದು ನಾನು English ನಲ್ಲಿ ಬರೆದ ಕವನ. ಆದ್ರೆ ನನಗೆ ಈ ವ್ಯಾಕರಣ ಸರಿಯಾಗಿ ಗೊತ್ತಿಲ್ಲ. ದಯವಿಟ್ಟು ತಪ್ಪಿರುವುದನ್ನು ತಿದ್ದಿ.)

Tuesday, August 5, 2008

ಕ್ಲಿಕ್..!


ರೆಡಿ...
ಓ.ಕೆ.
ಕ್ಲಿಕ್.!!

ಮತ್ತೆ ಯಾಕೆ ಬಂದೆ..

ಮತ್ತೆ ಯಾಕೆ ಬಂದೆ ನನ್ನ ಬಾಳಿಗೆ,
ನನ್ನ ಈ ಹಾಳೆಗೆ,
ಮತ್ತೆ ಬರುವೆಯಾ ನನ್ನ ನಾಳೆಗೆ??

ಬಿಡು.. ಬಿಡು... ಬಿಟ್ಟು ಬಿಡು,
ನನ್ನ, ನನ್ನ ಪಾಡಿಗೆ.
ಬರುವುದಿದ್ದರೆ ಬಂದು ಬಿಡು
ಜೊತೆಯಾಗಿ ನನ್ನ ಹಾದಿಗೆ.
ತೊಡರದಿರು ಎದುರಾಗಿ ಹೀಗೆ
ಅಡಿಗಡಿಗೆ.

ಒಂದು ಸಾಲಿನ ಬಗ್ಗೆ ಒಂದಿಷ್ಟು....

ಸುಮಾರು ಐದು ವರ್ಷಗಳ ಹಿಂದೆ ನನ್ನ ಸ್ನೇಹಿತನೊಬ್ಬ ಈ ಸಾಲನ್ನ ಹೇಳಿದ್ದ ನೆನಪು, ದಯವಿಟ್ಟು ಇದರ ಬಗ್ಗೆ ಗೊತ್ತಿದ್ದವರು ಒಂದಿಷ್ಟು ಹೇಳಿ.

"ದೀಪವಾರಿಸು ಗೆಳೆಯ ನನಗೆ ಬೆಳಕು ಬೇಕಾಗಿದೆ"

.........ಮಲಗಿತ್ತು ಮುಗಿಲು

ದುಡಿದು ಬೆವರಿ ಬಂದ ದೇಹ,
ಏನು ಮಾಡಿದರೂ ತೀರದ ದಾಹ.
ಕಗ್ಗತ್ತಲ ಕೋಣೆಯ ತುಂಬಾ ಬೆವರ ಮುಗ್ಗಿನ ಘಮ,
ಬೆರೆಯುತ್ತಿದೆ ಅದರೊಂದಿಗೆ ದುಂಡು ಮೊಗ್ಗಿನ ಘಮ!

ಅದುರುವ ಅಧರಗಳ ಮಿಂಚು.
ಹುಡುಕುತಿವೆ ಕಣ್ಣು: ಏನೇನೋ ಸಂಚು!!
ಮೆಲ್ಲನೆ ಜಾರಿದಂತೆ ನಾಚಿಕೆಯ ಪರದೆ
ಮೆಲ್ಲಗೆ ಹಾರಿತ್ತು ಅರಿವೆ, ಅಡ್ಡ ಬರದೆ.

ನಾಚಿ ಸರಿದಿದೆ ಬೆಳಕು, ಸುತ್ತಲೂ ಕತ್ತಲೆ,
ಬಾಚಿ ತಬ್ಬಲು ಬರೀ ಬೆತ್ತಲೆ!!
ನಾನೋ ಕಲಿತವನಲ್ಲ ಈಜು,
ಆದರೂ ಈಜಿದ್ದೆ, ಅದೇ ಮೋಜು!

.....
ಅರಳಿದ ಮೈ ಮನ, ಬಾಗಿದ ಕಾಮನ ಬಿಲ್ಲು,
ತಬ್ಬಿ ಮಲಗಲು, ಮಲಗಿತ್ತು ಮುಗಿಲು...!!!!!

Friday, July 25, 2008

ತುಂಗಾ ಸೇತುವೆಯಿಂದ ತುಂಬಿ ಹರಿವ ತುಂಗೆಯ ಸೆರೆ ಹಿಡಿದು ತಂದು...











ಕೊಪ್ಪ ತಾಲ್ಲೂಕಿನ ನಾಗಲಾಪುರ(ಹರಿಹರಪುರ)ದ ಬಳಿಯ ಸುಮಾರು ನೂರು ವರ್ಷ ಹಳೆಯದಾದ ತುಂಗಾ ಸೇತುವೆಯಿಂದ ತುಂಗೆಯನ್ನು ಸೆರೆ ಹಿಡಿದು ತಂದಿದ್ದೇನೆ, ನಿನಗಾಗಿ.





Thursday, July 24, 2008

ಮೌನವಾಗುತ್ತೇನೆ....

ಮೌನವಾಗುತ್ತೇನೆ,
ಮತ್ತೂ ಮೌನವಾಗುತ್ತೇನೆ.
ನನಗೆ ಗೊತ್ತು:
ನೀನಿಲ್ಲದ ಈ ಹೊತ್ತು,
ಮೌನವಾಗಲೇ ಬೇಕು.
ನನ್ನೊಳಗೆ ನಾನಾಗಿ.

ಆದರೂ ನಿನಗಾಗಿ ಮನದಲ್ಲಿದ್ದ ಮಾತುಗಳು
ಮತ್ತೆ ಹರಿಯಲೇ ಬೇಕು,
ಭಾವಗಳಾಗಿ, ನಿಟ್ಟುಸಿರಾಗಿ,
ದಟ್ಟ ನೆನಪುಗಳ ಪುಟ್ಟ ನರಳಿಕೆಯಾಗಿ,
ಹರಿಯಲೇ ಬೇಕು
ಮೊದಲು ಭಾವವಾಗಿ,
ನಂತರ ಹಾಡಾಗಿ ಹೆಮ್ಮೌನದಲಿ,
ಮತ್ತೆ ಮೌನವಾಗಿಯೇ...!

Wednesday, July 23, 2008

ಒಂದು ಪ್ರತಿಕ್ರಿಯೆ...

ತೇಜಸ್ವಿನಿಯವರ
**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
ಕವನಕ್ಕೆ ಪ್ರತಿಕ್ರಿಯೆ:-
ಒಲುಮೆಯ ಸಾಗರವಿರುವುದಕೆ
ನೋವ-ನಲಿವ ಅಲೆಗಳೇಳುವುದು.
ಒಲುಮೆಯ ಸಾಗರವಿರುವುದಕೆ
ಮುತ್ತುಗಳು ಅರಳುವುದು.
ಒಲುಮೆಯ ಸಾಗರವಿರುವುದಕೆ
ಆಗಾಗ ಸುನಾಮಿಯೂ ಏಳುವುದು

ಆದ್ದರಿಂದಲೇ
ಅದಕ್ಕೆ ಒಲುಮೆಯೆನ್ನುವುದು!!


ಸಿರಿಮನೆ ಫಾಲ್ಸ್ ನ ಭವ್ಯ ನೋಟ...