Friday, July 25, 2008

ತುಂಗಾ ಸೇತುವೆಯಿಂದ ತುಂಬಿ ಹರಿವ ತುಂಗೆಯ ಸೆರೆ ಹಿಡಿದು ತಂದು...











ಕೊಪ್ಪ ತಾಲ್ಲೂಕಿನ ನಾಗಲಾಪುರ(ಹರಿಹರಪುರ)ದ ಬಳಿಯ ಸುಮಾರು ನೂರು ವರ್ಷ ಹಳೆಯದಾದ ತುಂಗಾ ಸೇತುವೆಯಿಂದ ತುಂಗೆಯನ್ನು ಸೆರೆ ಹಿಡಿದು ತಂದಿದ್ದೇನೆ, ನಿನಗಾಗಿ.





Thursday, July 24, 2008

ಮೌನವಾಗುತ್ತೇನೆ....

ಮೌನವಾಗುತ್ತೇನೆ,
ಮತ್ತೂ ಮೌನವಾಗುತ್ತೇನೆ.
ನನಗೆ ಗೊತ್ತು:
ನೀನಿಲ್ಲದ ಈ ಹೊತ್ತು,
ಮೌನವಾಗಲೇ ಬೇಕು.
ನನ್ನೊಳಗೆ ನಾನಾಗಿ.

ಆದರೂ ನಿನಗಾಗಿ ಮನದಲ್ಲಿದ್ದ ಮಾತುಗಳು
ಮತ್ತೆ ಹರಿಯಲೇ ಬೇಕು,
ಭಾವಗಳಾಗಿ, ನಿಟ್ಟುಸಿರಾಗಿ,
ದಟ್ಟ ನೆನಪುಗಳ ಪುಟ್ಟ ನರಳಿಕೆಯಾಗಿ,
ಹರಿಯಲೇ ಬೇಕು
ಮೊದಲು ಭಾವವಾಗಿ,
ನಂತರ ಹಾಡಾಗಿ ಹೆಮ್ಮೌನದಲಿ,
ಮತ್ತೆ ಮೌನವಾಗಿಯೇ...!

Wednesday, July 23, 2008

ಒಂದು ಪ್ರತಿಕ್ರಿಯೆ...

ತೇಜಸ್ವಿನಿಯವರ
**ನನ್ನ-ನಿನ್ನ ನಡುವೆ**
ಒಲುಮೆಯ ಸಾಗರವಿದೆ
ನೋವ-ನಲಿವ
ಮುತ್ತುಗಳ ರಾಶಿಯಿದೆ
ಆದರೂ ಅದೇಕೋ
ಒಡಲಾಳದೊಳು
ಸುನಾಮಿಯೂ ಇದೆ!
ಕವನಕ್ಕೆ ಪ್ರತಿಕ್ರಿಯೆ:-
ಒಲುಮೆಯ ಸಾಗರವಿರುವುದಕೆ
ನೋವ-ನಲಿವ ಅಲೆಗಳೇಳುವುದು.
ಒಲುಮೆಯ ಸಾಗರವಿರುವುದಕೆ
ಮುತ್ತುಗಳು ಅರಳುವುದು.
ಒಲುಮೆಯ ಸಾಗರವಿರುವುದಕೆ
ಆಗಾಗ ಸುನಾಮಿಯೂ ಏಳುವುದು

ಆದ್ದರಿಂದಲೇ
ಅದಕ್ಕೆ ಒಲುಮೆಯೆನ್ನುವುದು!!


ಸಿರಿಮನೆ ಫಾಲ್ಸ್ ನ ಭವ್ಯ ನೋಟ...





























Monday, July 21, 2008

ಕುಂದಾದ್ರಿಯ ನೆತ್ತಿಯಿಂದ ಕಿತ್ತು ತಂದಿದ್ದು...

ಹುಷಾರು ಮಾರಾಯ್ತಿ ಮುಂದೆ ನೋಡು ಬಿದ್ದು ಬಿಟ್ಟೀಯೆ..

ಶ್... ಸುಮ್ಮನಿರು ಮಾತು ಬೇಡ...


ಹೇಯ್ ಆ ಹೂವನ್ನೇಕೆ ಕೀಳಲು ಹೋಗುತ್ತೀ..

ಮೇಗುಂದಾದಿಂದ ನಿನಗಾಗಿ ತಂದಿದ್ದು....


ಮೊನ್ನೆ ನೀ ಬರೊಲ್ಲವೆಂದು ತಿಳಿದಾದ ಮೇಲೆ ಒಬ್ಬನೇ ಹೋಗಿದ್ದೆ.
ಅಲ್ಲಿಂದ ತಂದಿದ್ದೇನೆ ನಿನಗಾಗಿ,
ಇದೆಲ್ಲವನ್ನೂ ಹೆಕ್ಕಿ,
ನನ್ನ ಪ್ರೀತಿಯ ಹಕ್ಕಿಯೇ ನಿನಗಾಗಿ.

ಅಂದ ಹಾಗೆ ನಿನಗೆ ಗೊತ್ತಾ..
ಪೊಲೀಸರು ಹುಡುಕುತ್ತಿದ್ದಾರಂತೆ!
ಯಾಕೆ ಗೊತ್ತಾ..?

ಯಾರಿಗೂ ಹೇಳ ಬೇಡ
ನಾನು ಅಲ್ಲಿ ಕಂಡದ್ದೆಲ್ಲವನ್ನೂ
ಸೆರೆ ಹಿಡಿದು ತಂದಿದ್ದೇನೆ ನಿನಗಾಗಿ
ಏನನ್ನೂ ಉಳಿಸದಂತೆ...!!!!!!

Tuesday, July 15, 2008

ನಾನೂ ಬರೆಯ ಬೇಕಿದೆ "ಚೆ"..

(ನನ್ನಳಗಿನ ಹಾಡು ಕ್ಯೂಬಾ ಓದಿದ ಮೇಲೆ ಬರೆದದ್ದು)
ನಾನೂ ಬರೆಯ ಬೇಕಿದೆ ಹಾಡು,
ನಿನ್ನಂತೆಯೇ "ಚೆ".
ಸೋಮಾರಿಯಾದ ನನ್ನ ದೇಶಕ್ಕೆ ಬಿಸಿ ಮುಟ್ಟಿಸಲು,
ತೂಕಡಿಸುತ್ತಿರುವ ನನ್ನ ಜನರ ಮಂಕು ಓಡಿಸಲು,
ಕೋವಿ ಹಿಡಿದು ನೀ ಬರೆದಂತೆಯೇ ನನ್ನೀ ಪೆನ್ನಿಂದ.
ನಾನೂ ಬರೆಯ ಬೇಕಿದೆ "ಚೆ".

ಬರೆಯುವುದಕ್ಕೆ ಮುನ್ನ ನಾನೇ
ಮೊದಲು ಬಯಲಾಗ ಬೇಕಿದೆ.
ಮನದಲ್ಲಿ ತುಂಬಿರುವ ಸಂಕೋಲೆಗಳ
ಕಿತ್ತೊಗೆಯ ಬೇಕಿದೆ.
ಹೋರಾಟದ ಪೆಡಲು ತುಳಿಯ ಬೇಕಿದೆ,
ನಂತರವಷ್ಟೇ
ನಾನೂ ಬರೆಯ ಬೇಕಿದೆ "ಚೆ".

ನೋಡಿ, ನೋಡಿ ಮನಸ್ಸು ಕುದಿಯುತ್ತಿದೆ,
ನಿಂತ ನೀರಂತೆ ಕೊಚ್ಚೆಯೆದ್ದು, ಹಸಿರಾಗಿ
ಪಾಚಿಗಟ್ಟಿ ಒಣಗುತ್ತಿರುವ ನ್ನವರ ಕಂಡು.
ಮರುಗುತ್ತಿದೆ "ಚೆ"

ಮರುಕ ಬೇಕಿಲ್ಲ, ಬಾ "ಚೆ"
ನೀ ಇಲ್ಲೇ ಹುಟ್ಟಿ,
ಯಾಕೆಂದರೆ ಮತ್ತೆ ಯಾರೂ ಬರೆಯಲಾರರು
ನಿನ್ನಂತೆ........

ತಣಿದ ಭುವಿಯರಳಿತ್ತು.........

ಮೆಲ್ಲಗೆ ಗಾಳಿಯೇಳುತ್ತಿದೆಯೆನಿಸುತ್ತಿತ್ತು........
ಅಲ್ಲೆಲ್ಲೋ ಸುಂಟರಗಾಳಿಯೆದ್ದು,
ಮೋಡ ಕೆಂಧೂಳಿಯಿಂದ ಕೆಂಪಗಾಗಿತ್ತು.
ಎಲ್ಲೋ ಹನಿಯುತ್ತಿರ ಬೇಕು:
ಘಮ ಮೂಗಿಗಡರುತ್ತಿತ್ತು.
ರೊಯ್ಯನೆ ಬಿರುಗಾಳಿಯದ್ದಿತು.
ಮರ, ಗಿಡ, ಬೆಟ್ಟ.... ಊಹೂಂ...ಯಾವ ತಡೆಯೂ ಇಲ್ಲ.
ಯಾವುದೇ ತಡೆಯಿಲ್ಲ: ಆ ಬಿರುಸಿಗೆ.!
ಅಬ್ಬರದ ಮಳೆ, ಹುಚ್ಚು ಹೊಳೆ.
ಅದೇನು ರಭಸ, ಅದೇನು ಮೊರೆತ!
ಹಾಗೆಯೇ ತಣ್ಣಗಾಯಿತು..!!!

ತಣಿದ ಭುವಿಯರಳಿತ್ತು,
ದಣಿದ ಮಳೆ ಭುವಿಯಲ್ಲಿ ಹುದುಗಿತ್ತು.
ಈಜು ಮುಗಿದಿತ್ತು.!!

ಯಾಕೆಂದರೆ ನನ್ನೊಂದಿಗೆ ನೀನಿರುವೆಯಲ್ಲ.......

ತೀವ್ರ ಚಳಿ, ಮೈ ಮರಗಟ್ಟುವಂತಹ ತಂಗಾಳಿ.
ಮೈ ಮೂಳೆಯ ನಡುವಲ್ಲೂ ನಡುಕ,
ಹಲ್ಲುಗಳು ಕಟಕಟ,
ನಾಲಗೆ ತೊದಲು, ಮಾತು ಹೊರಡುತ್ತಿಲ್ಲ,
ಮನೆಯ ಸುತ್ತೆಲ್ಲಾ ಕಾವಳ,
ಹೊದೆಯಲು ಹೊದಿಕೆಯಿಲ್ಲ,
ಮೈ ಮೇಲೆ ಚೂರೂ ಬಟ್ಟೆಯಿಲ್ಲ,
ಆದರೂ ಚಳಿಯಿಲ್ಲ...!!!!! ಬೆವರ ಧಾರೆ ನಿಂತಿಲ್ಲ...!!!!
ಯಾಕೆಂದರೆ ನನ್ನೊಂದಿಗೆ ನೀನಿರುವೆಯಲ್ಲ..!!!!

Wednesday, July 2, 2008

ಬಾ ಸುಮ್ಮನೇ.....

ಬಾ ಸುಮ್ಮನೇ,
ಬಾಗಿಲ ಅಗುಳಿ ಹಾಕು; ಮನದ ಬಾಗಿಲ ತೆರೆ.
ಮೈ ಮನವ ಹಗುರ ಗೊಳಿಸು,
ಹರಿಯಲಿ ಒಲವ ಧಾರೆ..!
ಯಾಕೀಗ ಮಾತುಗಳ ಗೊಡವೆ?
ಬೇಡ ಯಾವುದೇ ಪರಿವೆ,
ಹಾರಿ ಹೋಗಲಿ ಬಿಡು ಆ ಅರಿವೆ,
ಯಾಕೆಂದು ನೀ ಮುಂದೆ ಅರಿವೆ.
ಬಯಲಾಗು ಬೆತ್ತಲಾಗು ಮೈ ಮನ ಎರಡನ್ನೂ,
ಅಂಜಿಕೆ ನಾಚಿಕೆಯ ಗೊಡವೆಯೇಕೆ,
ಬೇಡ ಯಾವುದೇ ತೆರೆ,
ಪ್ರಣಯದ ಬಾಗಿಲು ತೆರೆ,
ಬಾ ನನ್ನೊಳಗೆ ನೀ ಮೊರೆ,
ಬರಲಿ ಒಲವ ನೆರೆ.
ಬಾ ನನ್ನೊಳಗೆ ಈಸು ಬೀಳು
ಏಕೆಂದರೆ, ಇಂದು ನಮ್ಮ ಮೊದಲಿರುಳು....!!!!
(ನಮ್ಮ ಮೊದಲಿರುಳಿಗೆಂದು ಬರೆದದ್ದು)